Contents Provided by Kannada & Culture Dept. Haveri. | Best Viewed @ IE 1024 X 768
ಉದ್ಘಾಟನೆ
ಕಾರ್ಯಕ್ರಮಗಳು
ವಿವಿಧ ಸಮಿತಿಗಳು
ಕಲಾವಿದರು
ಇತರ ಚಟುವಟಿಕೆಗಳು
ಜಿಲ್ಲೆಯ ವೆಬ್ ಸೈಟ್

Designed & Developed By

National Informatics Center (NIC), HAVERI District. DIT, MoCIT, Government of India
Group Of Municipal IT Staffs Haveri & Savanur
ವಿವಿಧ ಕಾರ್ಯಕ್ರಮಗಳ ವಿವರ.
 ಸ್ಥಳ/Place.
1. ನಗರಸಭೆ ಮ್ಯದಾನ ಹಾವೇರಿ.
2. ಬಸವೇಶ್ವರ ಸಮೂದಾಯ
    ಭವನ ಹಾವೇರಿ
3. ಹುಕ್ಕೆರಿಮಠದ ಆವರಣ ಹಾವೇರಿ
ಕಾರ್ಯಕ್ರಮ ಸೂಚಿ/Time Table.
ದಿ: ೨೦೦೮/ಡಿಸೆಂಬರ್ ೫,೬ ಮತ್ತು ೭ರಂದು ವಿವಿಧ ಸ್ಥಳಗಳಲ್ಲಿ...
1. ದಿ:05/12/2008/ ರಂದು
2. ದಿ:06/12/2008/ ರಂದು
3. ದಿ:07/12/2008/ ರಂದು
ಹೆಚ್ಚಿನ ಮಾಹಿತಿಗಾಗಿ...
ಶ್ರೀ. ಬಿ.ಡಿ. ಹಿರೇಗೌಡರ.

ಸಹಾಯಕ ನಿರ್ದೆಶಕರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ,

ಹಾವೇರಿ - 581110

ಕಛೇರಿ: 08375 249295

ಮೋ: 9448267421

ನಾಡಿನ ನಕ್ಷೆಯ ಮಧ್ಯದಲ್ಲಿರುವ ಹಾವೇರಿ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆ, ಯಾಲಕ್ಕಿ ಕಂಪಿನ ಈ ಜಿಲ್ಲೆಯಲ್ಲಿ ಭಾವೈಕ್ಯತೆ ಹರಿಕಾರ ಕನ್ನಡದ ಕಬೀರ, ಜಾನಪದ ಸಂತಕವಿ ಶಿಶುನಾಳ ಶರೀಫ, ದಾಸ ಶ್ರೇಷ್ಠರಾದ ಕನಕದಾಸರು, ಜನಕವಿ ಸರ್ವಜ್ಞ , ಕಾವ್ಯ ಕೃಷಿ ಮಾಡಿದ್ದಾರೆ. ಕಾದಂಬರಿಗಳ ಪಿತಾಮಹ ಗಳಗನಾಥ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೃ. ಗೋಕಾಕ, ಆಧುನಿಕ ವಚನಕಾರ ಡಾ. ಮಹದೇವ ಬಣಕಾರ, ಶ್ರೇಷ್ಠ ಕವಿ ಸು.ರಂ. ಯಕ್ಕುಂಡಿ, ಶಿಕ್ಷಣ ತಜ್ಞ ಎಸ್.ಎಸ್. ಒಡೆಯರ, ಹಿರಿಯ ಪತ್ರಕರ್ತ ನಾಡೋಜ, ಡಾ. ಪಾಟೀಲ್ ಪುಟ್ಟಪ್ಪನಂತಹ ದಿಗ್ಗಜರು ಈ ನೆಲದ ಕುಡಿಗಳು.

ಸಂಗೀತ ಕ್ಷೇತ್ರದ ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಗಂಗೂಬಾಯಿ ಹಾನಗಲ್ಲ, ಚಂದ್ರಶೇಖರ ಪುರಾಣಿಕಮಠ, ಮುಂತಾದವರ ಮೂಲನೆಲೆ ಈ ಜಿಲ್ಲೆಯದು ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ವೈಶಿಷ್ಠಪೂರ್ಣ ಪರಂಪರೆ ಹೊಂದಿರುವ ಹಾವೇರಿ ಜಿಲ್ಲೆ ಪ್ರಾಚೀನ ದೇವಾಲಯಗಳ ತೆಕ್ಕೆಯಲ್ಲಿ ಪವಡಿಸಿದೆ. ಈ ವೈಶಿಷ್ಠಪೂರ್ಣ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ. ಸವಣೂರ ವಿಳ್ಯೆದೆಲೆ ಉತ್ಪಾದನೆಯಲ್ಲಿ ರಾಷ್ಟ್ರವ್ಯಾಪಿ ಖ್ಯಾತಿ ಗಳಿಸಿದೆ.

ಭಾರತ-ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜೊತೆ ಮೋಟೆಬೆನ್ನೂರಿನ ಹುತಾತ್ಮ ಮೈಲಾರ ಮಹದೇವಪ್ಪನವರು, ಹಾನಗಲ್ಲ ತಾಲೂಕಿನ ಕನ್ನೇಶ್ವರ ರಾಮ, ಹಳ್ಳಿಕೇರಿ ಗುದ್ಲೆಪ್ಪನವರು, ಹೊಸಮನಿ ಸಿದ್ಧಪ್ಪನವರು, ಮೆಣಸಿನಹಾಳದ ತಿಮ್ಮನಗೌಡರು, ವೀರಯ್ಯ ಹಿರೇಮಠ, ತಿರಕಪ್ಪಮಡಿವಾಳರ, ಹಾಗೂ ಸಂಗೂರು ಕರಿಯಪ್ಪನವರು ಮುಂತಾದವರು ಬ್ರಿಟೀಷರ ವಿರುದ್ಧ ಸಿಡಿದೆದ್ದವರು. ಈ ರೀತಿ ಹಾವೇರಿ ಜಿಲ್ಲೆ ವಿವಿಧ ಕ್ಷೇತ್ರಗಳಲ್ಲಿ ಮೊದಲಿನಿಂದಲೂ ಮಂಚೂಣಿಯಲ್ಲಿದೆ.